ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 9 May 2012

2312 ರಲ್ಲಿ.... - 1

ಅದೇ ದೀಪದ ಬುಡ್ಡಿಯಲ್ಲಿ
ಹೀಗೂ ಇತ್ತು ಲೋಕ
ನಾಕವೋ ನರಕವೋ ಅರಿಯೆ
ಎಂದು ಬರೆದಿದ್ದನ್ನು
ಮರಿ ಮಕ್ಕಳೋದುತ್ತಿದ್ದವು
ಸೀಮೆಎಣ್ಣೆಯೆಂಬ ಪದವಿಲ್ಲ
ಕಡ್ಡಿ ಕಡ್ಡಿ ಸಿಕ್ಕಿಸಿ ಮನೆ ಬೆಳಗಿದ್ದರು

ಧೊಪ್ಪನೇ ಬೆಂಗಳೂರು ಬಿದ್ದ ಕಥೆ
ಮಂಜುಗಣ್ಣಜ್ಜಿ ಹೇಳುತ್ತಿದ್ದಳು
ಜಲ ನುಂಗದ ಟಾರ್ ರಸ್ತೆ
ನೆಲ ನುಂಗಿದ ಕಟ್ಟಡಗಳವಸ್ಥೆ
ಭೂ ಒಕ್ಕುಳು ಮುಚ್ಚಿ
ನೀರು ಬಗೆದ ಬೋರ್ ವೆಲ್ ಅತ್ತು
ಜನ ಎಂದೋ ಗುಳೆ ಹೊರಟಿದ್ದರು
ಗೋಳಿಕ್ಕುವುದ ಮರೆತು ಬೆವರಿದ್ದರು

ಜಲವಿಲ್ಲದ ಪ್ರಳವೆಂದದಕ್ಕೆ ಹೆಸರು
ಕ್ಯಾಕರಿಸಿ ಬೆಂಕಿಯುಗುಳಿತ್ತು
ಭೂ ಬಸಿರು!
ಹೆತ್ತವರು ಅವರ ಹೊತ್ತವರು
ಜಗಕ್ಕೆ ವಿಷಬೀಜ ಬಿತ್ತವರು
ಮೂಡಿಸಿದ
ಪಡಿಹೆಜ್ಜೆ ಇತಿಹಾಸಕ್ಕೆ ಕೊಡಲಿ ಇಟ್ಟಿತ್ತು
ಪಳೆಯುಳಿಕೆ ಯಂತ್ರದ ಪಟವನ್ನು
ತಾಳೆಗರಿ ಮೇಲೆ ಕೆತ್ತಲಜ್ಜಿಗೆ
ಕೈ ನಡುಕ
ಮೊನ್ನೆ ಅಗೆದಾಗ ಸಿಕ್ಕ ಪ್ಲಾಸ್ಟಿಕ್ ತುಣುಕ
ನೋಡಿದೊಡನೆ ಕೆಲವರಿಗೆ ಮೈ ಪುಳಕ

ಅಷ್ಟರಲ್ಲೇ ಪಂಜಿನ ಮಾಚ ಬಂದ
ಮುಂದಿನ ಆರು ತೇದಿಯ ಮದುವೆಗೆ
ಬಂಡಿ ಕಟ್ಟಿ, ತುತ್ತು ಬುತ್ತಿ ಹೊತ್ತು
ನಡೆವ ಎತ್ತುಗಳ ಕಸುವ
ಬೆನ್ನು ತಟ್ಟಿ ಮೆಚ್ಚಿ ಹೊರಟಿದ್ದ
ಬೆಳ್ಳಂಬೆಳಗ್ಗೆ ಹೊಲ ಉಳುವಾಗ
ಆತ ಗುನುಗಿದ ಹಾಡು ಲೋಕದಚ್ಚರಿ
ಸುತ್ತಲ ಹತ್ತು ಹಳ್ಳಿಗೆ ತತ್ವಜ್ಞಾನಿ

ಅಜ್ಜಿ ಕಥೆ ಮುಂದುವರೆಸಿದಳು
ಅರಮನೆಯೊಂದು ಉರುಳಿ
ನೆರೆಮನೆಯ ಇತಿಯಾಸ ಮೂಲೆಗೆ
ಓಡೋಡಿ ಬಂದವಚಿ ಕುಳಿತದ್ದು
ಎಡಿಸನ್ ಮನೆ ಮುಂದೆ
ಕತ್ತಲು ತುಂಬಿ ತಡಕಾಡಿದ್ದು
ಐನ್ ಸ್ಟೀನ್ ಅಣು ಬೆಂಕಿಸಿದ್ದು
ಹೇಳಿ ಮುಗಿಸಿಲ್ಲ
ಮಕ್ಕಳಿಗೆ ನಿದ್ದೆಯೋ ನಿದ್ದೆ
ಸಮಯ ಏಳು ಮೀರಿತ್ತು, ಅಜ್ಜಿಗೂ ಆಶ್ಚರ್ಯ

1 comment:

  1. ಸುಂದರ ಮತ್ತು ತಾಕತ್ತಿನ ಕವಿತೆ. ತುಂಬಾ ತೂಕವಿದೆ. ವಂದನೆಗಳು.

    ReplyDelete