ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 16 October 2011

ಒಂದು ಅಳು...

ಮರ ಕಡಿದು ನೆಲ ಅಗೆದು
ಡಾಂಬರು ಮೆತ್ತಿ
ಬಸ್ಸು ರೈಲು ಓಡಿಸಿ
ಆಕಾಶಕ್ಕೆ ಗೋಡೆ ಎಬ್ಬಿಸಿ
ಅಂಗಡಿ ನೂರಾದವು
ಜನಜಾತ್ರೆ ನೂಕು ನುಗ್ಗಲು
ಅಡಿಯಿಡಲು ನೆಲವಿಲ್ಲ
ಮುಡಿಸಿಂಗಾರ ಉಳಿದಿಲ್ಲ
ಕಾಡಿದ ಜಗದೋಟಕ್ಕೆ
ಬೇಡಿಕೆಯ ಕುದುರೆ
ಓಡಿ ಓಡಿ ಸುಸ್ತಾಗಿರಲು
ನಕ್ಕವು ಎರಡು ಮರ
ಒಂದಕ್ಕೆ ವರ್ಷ ನೂರು
ಇನ್ನೊಂದಕ್ಕೆ ಹತ್ತು ಕಡಿಮೆ

ಬರಿದೆ ದಾರಿಯಲ್ಲಿ
ನಡೆದವರಿಗೆ ನೆರಳು
ಹೂಹಣ್ಣು ತೊಗಟೆ
ಕೆಳಗೆ ಕುಳಿತು ಹರಟೆ
ಒಳಗೆ ನಕ್ಕ ಮರಕ್ಕೆ
ಭವಿಷ್ಯದಲ್ಲಿ ದಿಗಿಲು
ಅದಕ್ಕೆ ಬೇಲಿ ಕೈ
ಚಕ್ಕೆಯುದುರಿ ಭಿತ್ತಿಪತ್ರ
ಹೂತ ಪಾದ ಮುರಿದು
ಕೈಕಾಲು ಕತ್ತರಿಸಿ
ವಿದ್ಯುತ್ ತಂತಿ ಪೋಣಿಸಿ
ಬಿಸಿಲಿನಲ್ಲಿ ನಿಂತರು
ಬುಡಕ್ಕೆ ಉಚ್ಚೆ ಉಯ್ದು
ಬಂಧುಬಳಗವ ನುಂಗಿದರು
ಎಲ್ಲ ಕಳೆದುಕೊಂಡು ಮೆರೆದರು

No comments:

Post a Comment