ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 30 September 2011

ಅಳಿದ ಪ್ರೀತಿ...

ಅಂಗಡಿಯಿಂದ ಅಗ್ಗ ತಂದ
ಜಾತಿ ಹುರುಳಿಗೆ ಕೊರಳೊಡ್ಡಿದ
ಹಗ್ಗ ಬೇಡ ಸೀರೆ ಸಾಕು ಎಂದು
ಅವಳೂ ಹೊರಡಲು ಸಿದ್ಧ
ಯಾರು ಒಂಟಿ ಬಿಡಲಿಲ್ಲ

ನೂರು ದಾರಿ ಸವೆಸಿ
ಎರಡು ಹೃದಯ ಕಲೆತು
ಬಾಳ ಹೊತ್ತಿಗೆಯಲ್ಲಿ ಕನಸಿನ
ಪುಟ ನೂರು ಬಾರಿ ತೆರೆದು
ನಕ್ಕು ಸಂತಸದಿ ಕಣ್ಣೀರು ಇಟ್ಟು
ಒಂದಾದ ಹೃದಯಗಳಲ್ಲಿ ಒಂದೆಲ್ಲಿ?

ಎಂತು ಜಾತಿ ರಕ್ತ ಒಂದೆ ಇರಲು
ಅವನಿಗಿಂತ ಗುಣವಂತ
ರೂಪವಂತ, ಸಿರಿವಂತ
ಹುಡುಕಿ ತರುತ್ತೇವೆ ಎಂದರು
ಕೋಟಿ ಇದ್ದರೇನು, ಅವನಿಲ್ಲವಲ್ಲ

ಹಿಡಿದ ಕೈ ತಾಳಿ ಕಟ್ಟಲಿಲ್ಲ
ತನ್ನ ಮೈ ಹಾಸಿಗೆ ಸೇರಲಿಲ್ಲ
ಅವನ ಮುಖ ಮಾಸಿ ಮಾಯವಾಗಲಿಲ್ಲ
ಮೂರು ದಿನ ಮುಗಿದಿಲ್ಲ
ತವರ ಹೊಸ್ತಿಲ ತುಳಿದರು

ಅಳುತ ಕುಳಿತರು ಹೆತ್ತವರು
ಮಗಳ ಭವಿಷ್ಯ ತುಳಿದವರು
ಮೂರು ಗೇಣಿನ ನರಕ
ಕಣ್ಣ ಮುಂದೆ
ತನ್ನ ಹೃದಯದ ಚಿತ್ರ
ಬಿಡಿಸಿಕೊಂಡು ಮುಂದೆ ನಡೆದಳು

No comments:

Post a Comment